ಬ್ಯಾಂಕ್ ನ ಆರ್ಥಿಕ ಸದೃಡತೆ ದಿನಾಂಕ 31/03/2020ರವರೆಗೆ ಷೇರು ಬಂಡವಾಳ : 5353.50 (ಲಕ್ಷ ರೂ.) ಆಪದ್ಧನ ಮತ್ತು ಇತರ ನಿಧಿಗಳು : 15132.98 (ಲಕ್ಷ ರೂ.) ಠೇವಣಿಗಳು : 56635.04 (ಲಕ್ಷ ರೂ.) ಸಾಲ ವಿತರಣೆ : 76570.17 (ಲಕ್ಷ ರೂ.) ಬ್ಯಾಂಕಿನ ವಹಿವಾಟು : 133205.21 (ಲಕ್ಷ ರೂ.) ನಮ್ಮ ಬ್ಯಾಂಕ್ ಉತ್ತಮ ಆರ್ಥಿಕ ಸದೃಢತೆ ಹೊಂದಿದ್ದು [...]
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೋವಿಡ್-19ಅನ್ನು ತಡೆಗಟ್ಟಲು ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ವೇಳೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ವತಿಯಿಂದ 8000 ಕಿಟ್ ವಿತರಣೆ ಮಾಡಲಾಯಿತು. ಪ್ರತಿ ಕಿಟ್ಟಿನಲ್ಲಿ ತಲಾ ಒಂದು N95 ಮಾಸ್ಕ್, ಒಂದು ಸಾನಿಟೈಸರ್, ಒಂದು ಸೋಪ್ ಇರುತ್ತದೆ. 5000 ಕಿಟ್'ಗಳನ್ನು ಮೈಸೂರಿನ ಭಾಗಕ್ಕೆ ಹಾಗೂ 3000 ಕಿಟ್'ಗಳನ್ನು ಚಾಮರಾಜನಗರ ಜಿಲ್ಲೆಗೆ ಹಂಚುವಂತೆ ಮಾನ್ಯ ಸಚಿವರಾದ ವಿ ಸೋಮಣ್ಣ [...]
ನಬಾರ್ಡ್ ಸಹಯೋಗದೊಂದಿಗೆ ಬ್ಯಾಂಕ್ ಕಾರ್ಯವೈಖರಿಯನ್ನು ತಿಳಿಯುವ ಸಲುವಾಗಿ "ವಲ್ ಸಾಡ್ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗುಜರಾತ್"(Valsad District Central Co-operative Bank Ltd.)ತಂಡವು ಇಂದು ಮೈಸೂರಿನ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಆತ್ಮೀಯವಾಗಿ ಬರಮಾಡಿಕೊಂಡು, ಅವರನ್ನು ಬ್ಯಾಂಕ್ ನ ಅಧ್ಯಕ್ಷರು ಸನ್ಮಾನಿಸಿದರು.
ಇಂದು ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷರಾದ ಶ್ರೀ ಜಿ. ಡಿ. ಹರೀಶ್ ಗೌಡರವರು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಗೆ ಚಾಲನೆ ನೀಡಿದರು. ಈ ವೇಳೆ ಬ್ಯಾಂಕ್ ನಿರ್ದೇಶಕರು, ಬ್ಯಾಂಕ್ ಸಿಬ್ಬಂದಿ ವೃಂದವು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಬೆಂಗಳೂರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಮೈಸೂರು ವತಿಯಿಂದ ಸಾರ್ವಜನಿಕರಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರದ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ನಗರ ಶಾಖೆಯಲ್ಲಿ ಹಮ್ಮಿಕೊಂಡಿದ್ದ "ಡಿಜಿಟಲ್ ಹಣಕಾಸು ಸಾಕ್ಷರತಾ ಜಾಗೃತಿ ಕಾರ್ಯಕ್ರಮಕ್ಕೆ ಡಿ.ಡಿ.ಎಂ.ನಬಾರ್ಡ್ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಮಾನ್ಯ ಶ್ರೀ ಮಣಿಕಂಠನ್ ಅವರ ಜೊತೆಗೂಡಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ರವರು ಕಾರ್ಯಕ್ರಮಕ್ಕೆ [...]
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.ಮೈಸೂರು ವತಿಯಿಂದ ಮೈಸೂರು ಮೆಡಿಕಲ್ ಕಾಲೇಜು ಅಲುಮ್ಮಿ ಅಸೋಸಿಯೇಷನ್ ಕಟ್ಟಡ, ಜೆಕೆ ಗ್ರೌಂಡ್ ನಲ್ಲಿ ಹಮ್ಮಿಕೊಂಡಿದ್ದ "2018-19ನೇ ಸಾಲಿನ 65ನೇ ವಾರ್ಷಿಕ ಮಹಾಸಭೆ"ಯ ಕಾರ್ಯಕ್ರಮ.
ನಮ್ಮ ಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ "ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ತೆರೆಯುವ ಸಪ್ತಾಹ"ಕ್ಕೆ ಅಧ್ಯಕ್ಷರಾದ ಜಿ.ಡಿ ಹರೀಶ್ ಗೌಡ ರಿಂದ ಚಾಲನೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ದ ನಂಜನಗೂಡು ತಾಲ್ಲೂಕಿನಲ್ಲಿ ಪ್ರಗತಿ ಪರಿಶೀಲನೆ ಸಭೆ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ ಡಿ ಹರೀಶ್ ಗೌಡ.