ಕಾಯಕ ಯೋಜನೆ ಅಡಿಯಲ್ಲಿ ಲಿಂಕೇಜ್ ಸಾಲ ವಿತರಣೆ

ಜನತಾ ನಗರ ಶಾಖೆಯಿಂದ ಕಾಯಕ ಯೋಜನೆ ಅಡಿಯಲ್ಲಿ ಜನತಾನಗರ ಹಾಗೂ ದಟ್ಟಗಳ್ಳಿಯ ಸಿರಿ, ದೃಷ್ಟಿ ಮಹಿಳಾ ಸ್ವಸಹಾಯ ಸಂಘಕ್ಕೆ ತಲಾ 10 ಲಕ್ಷ ರೂ ಸಾಲ ವಿತರಣೆ ಹಾಗೂ ಚಾಮುಂಡೇಶ್ವರಿ ಧನಲಕ್ಷ್ಮಿ ಶ್ರೀ ಬಾಲಗಂಗಾಧರ ನಾಥಸ್ವಾಮಿ ಮಹಿಳಾ ಸ್ವಸಹಾಯಕ್ಕೆ ಒಟ್ಟು 7 ಲಕ್ಷ ರೂ ಲಿಂಕೇಜ್ ಸಾಲ ವಿತರಣೆಯನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ರಿಂದ ಚೆಕ್ ವಿತರಿಸಲಾಯಿತು.ಈ ವೇಳೆ ಬ್ಯಾಂಕಿನ ನಿರ್ದೇಶಕರಾದ ಎಂ ಪಿ ಸುನಿಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ ಸಿ ಜನಾರ್ದನ್ , ಜಿ. ಎಂ ಶಶಿಧರ್ ಎಂ.ಟಿ., ಶಾಖಾ ವ್ಯವಸ್ಥಾಪಕರು ರಮೇಶ್, ಮೇಲ್ಚಿಚಾರಕರು ಸತೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.