ಬ್ಯಾಂಕ್ ನ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ

ನಮ್ಮ ಬ್ಯಾಂಕ್ ನ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಗುಂಡ್ಲುಪೇಟೆ ನಿರ್ದೇಶಕರಾದ ಶ್ರೀ ಎಂ.ಪಿ.ಸುನಿಲ್ ಅವರನ್ನು ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ ಸದಾನಂದ, ಶ್ರೀ ಚಿಕ್ಕಳ್ಳಿ ಕುಮಾರ್, ಶ್ರೀ ಸಿಂಧುವಳ್ಳಿ ಕೆಂಪಣ್ಣ, ಶ್ರೀ ಕುರಹಟ್ಟಿ ಮಹೇಶ್, ಶ್ರೀ ಎಚ್.ಸುಬ್ಬಯ್ಯ, ಶ್ರೀ ಸಿ.ಎನ್.ರವಿ, ಶ್ರೀ ನಾಗೇಂದ್ರ ಕುಮಾರ್, ಶ್ರೀ ಎಚ್.ಜೆ.ನಾಗೇಂದ್ರ ಪ್ರಸಾದ್, ಶ್ರೀ ಶಿವರಾಜ್, ಶ್ರೀ ಜಯರಾಮ್, ಶ್ರೀ ಪ್ರಭಾಕರ್, ಬ್ಯಾಂಕಿನ ಮುಖ್ಯ ನಿರ್ವಾಹಕರಾದ ಶ್ರೀ ಜಿ.ಸಿ. ಜನಾರ್ಧನ್, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಾಯಕ ಉಪ ನಿಬಂಧಕರಾದ ಶ್ರೀ ಹರೀಶ್ ಕುಮಾರ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.